ಇವತ್ತು ನಿನ್ನೆಯ ಹಾಗಿಲ್ಲ
ಅಲ್ಲ...ಯಾವತ್ತಿನ ಹಾಗೂ ಇಲ್ಲ
ಕೆದಕುತ್ತಿದ್ದೇನೆ ನನ್ನರಿವನ್ನ.....
ಎಂದಿನಂತೆ.. ಧಾವಂತದಿಂದ ..
ಫಲಾಫಲದ ನಿರೀಕ್ಷೆಯಿಲ್ಲದ ನಿರ್ಲಿಪ್ತತೆಯಿಂದ
ಎಣಿಕೆಗೆ ಸಿಗದಷ್ಟು ಕೋಶಗಳ ಜನನ
ಸ್ವಸ್ತ ಸ್ಪಷ್ಟಗತಿಯ ರಕ್ತಪರಿಚಲನ
ದೋಷಮುಕ್ತ ದೃಢಕಾಯ
ಆದರೂ ಇನ್ನೇನೋ ಗೋಜಲು ಗೋಜಲು
ಅತ್ತ ನಿಶೆಯು ಅಲ್ಲದ ...ಇತ್ತ ಪ್ರಭೆಯು ಅಲ್ಲದ ..
ಮಸುಕು ಮನಸ್ಥಿತಿ .....
ನಿಜ..ಇವತ್ತು ನಿನ್ನೆಯ ಹಾಗಿಲ್ಲ ....
ನಿನ್ನೆಯನ್ನೇ ನೆನದು ಮರುಗಿದ್ದೇನೆ..
ಕೆನ್ನೆ ಕಂಬನಿಯ ಸ್ನೇಹಕ್ಕೆ ಸಾಕ್ಷಿಯಾಗಿದ್ದೇನೆ
ಅಯ್ಯೋ....?!ನೆನಪಾಯಿತು ....
''ನಾನು ಅಳುವುದನ್ನೇ ಮರೆತಿದ್ದೆ''
ಪ್ರೌಢಳೆಂಬ ಬಿಗುಮಾನದಿಂದ
ನಗುವಿನಿಂದಲೇ ಗೆಲ್ಲುವೆನೆಂಬ ಭ್ರಮೆ ಯಿಂದ
ನಿಜ.. ನಿನ್ನೆಯ ಹಾಗೆ ನಾನಿಲ್ಲ..
ಕಣ್ಣಿರಾಗಬೇಕು ಒಮ್ಮೊಮ್ಮೆ ..
ಮನದ ಮಸುಕು ಕಳೆಯಲು..
ನಗುವಿಗೆ ಬೆಲೆ ಬರಲು ..
ಮಳೆನಿಂತ ಮುಗಿಲಿನಂತೆ ..
ಸ್ಪಷ್ಟವಾಗುವುದು ಭಾವನೆಗಳ ಕಂತೆ ..
ಸರಿ...ಇವತ್ತಿನಂತಿರುವುದಿಲ್ಲ ಇನ್ನೆಂದು.....
ನಿಜ ಇಂದು ನಿನ್ನೆಯ ಹಾಗಿಲ್ಲ !! ನಾಳೆಯನ್ನಾದರೂ ನಿನ್ನೆಯ ಹಾಗೆ ಮಾಡೋಣ !!! ತುಂಬಾ ಅರ್ಥಪೂರ್ಣ ಕವನ...
ReplyDeleteಅನುಷಾ ಮೇಡಂ , ನಿಮ್ಮ ಕವಿತೆಗಳು ಮುದ್ದು ಮುದ್ದಾಗಿವೆ. ನಂಗೆ ತುಂಬಾ ಇಷ್ಟವಾದವು ಹಿಗೇಯೆ ಬರೆಯುತ್ತಾ ಇರಿ ಪ್ಲೀಜ್ , ಓದುವ ಭಾಗ್ಯ ನನ್ನದಾಗಲಿ
ReplyDeleteಇದೊಂದು ನೆನಪು ,ಕನಸು ನನಸುಗಳ ಅದ್ದಿ ತೆಗೆದ ಮುದ್ದು ಕವಿತೆ..ಧನ್ಯವಾದಗಳು
ಬಿಡಿವಿದ್ದಾಗ ನನ್ನ ಬ್ಲಾಗ್ www.savira-kanasu.blogspot.com ಗೆ ಬೇಟಿ ಕೊಡಿ.
doctre muddada kavite thank u
ReplyDeletekeep writing dear
ReplyDeleteChanda barite. Praasa kammi maaDu. Innoo cholo irtu. Ishtu oLLe blog maDi ishtu dona heLiddilyalla. Keep this going. OLLeya kavitegaLu.
ReplyDelete